ಗೋಸಲ ಚನ್ನಬಸವೇಶ್ವರ ದೇವಸ್ಥಾನವು ಗುಬ್ಬಿಯಲ್ಲಿದೆ. ಇದು ಒಂದು ಪುಣ್ಯಕ್ಷೇತ್ರದ ಜೊತೆಗೆ ಸಾಂಸ್ಕ್ರತಿಕ ಕ್ಷೇತ್ರವಾಗಿದೆ.
ಗುಬ್ಬಿ ಶ್ರೀ ಚನ್ನಬಸವೇಶ್ವರರು ಉನ್ನತ ವೀರಶೈವ ಹಿರಿಯ ಗುರುಪರಂಪರೆಗೆ ಸೇರಿದವರು 18ನೇ ಪೀಠಾಧಿಕಾರಿಗಳಾದ ಶೂನ್ಯ ಸಿಂಹಾಸನಾಧಿಪತಿಗಳಾದ ಅಲ್ಲಮಪ್ರಭು ಪರಂಪರೆಯ ಶ್ರೀ ಚನ್ನಬಸವೇಶ್ವರರು ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯವರು.
ಇವರ ಮೊದಲ ಹೆಸರು ಗೋಸಲ ಚನ್ನಬಸವೇಶ್ವರ ಎಂದು. ಇವರು ತಮ್ಮ ಕೊನೆಯ ಕಾಲದಲ್ಲಿ ಗುಬ್ಬಿಯಲ್ಲಿದ್ದರು. ಆಗ ಅವರು ಇವರ ಹೆಸರಿನಲ್ಲಿ ದೇವಸ್ಥಾನವನ್ನು ಕಟ್ಟಿಸಿದ್ದರು.
ಗುಬ್ಬಿ ವೀರಣ್ಣನವರು ಶ್ರೀ ಚನ್ನಬಸವೇಶ್ವರಸ್ವಾಮಿಯ ದಯೆಯಿಂದ “ನಾಟಕರತ್ನ” ಎಂಬ ಬಿರುದನ್ನು ಪಡೆದು ಸ್ವಾಮಿಯ ಗುಡಿಗೆ ಬೆಳ್ಳಿಬಾಗಿಲು ಮಾಡಿಸಿ ಧನ್ಯತೆ ಮೆರೆದಿದ್ದಾರೆ. ಈಗಲೂ ಅವರ ಹೆಸರಿನಲ್ಲಿ “ವಿಚಿತ್ರಮಂಟಪ ಉತ್ಸವ” ಸೇವೆ ಸ್ವಾಮಿಗೆ ಸಲ್ಲುತ್ತಿದೆ.
ಅನೇಕ ಭಕ್ತರು ಅವರವರ ಅಭೀಷ್ಠದಂತೆ ನಾನಾ ವಾಹನಗಳ ಸೇವೆಯನ್ನು ಸ್ವಾಮಿಗೆ ಮಾಡಿಸಿ ಶ್ರೀ ಚನ್ನಬಸವೇಶ್ವರಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ.
ಗುಬ್ಬಿ ವೀರಣ್ಣರವರು ಚನ್ನಬಸವೇಶ್ವರ ನಾಟಕ ಮಂಡಳಿಯನ್ನು ನಡೆಸುತ್ತಿದ್ದರು.
ಗುಬ್ಬಿನಗರವು ರಾಷ್ಟ್ರೀಯ ಹೆದ್ದಾರಿ 206(ಬಿ.ಹೆಚ್.ರಸ್ತೆ)ಯಲ್ಲಿದ್ದು ತುಮಕೂರಿಗೆ ಹತ್ತಿರದಲ್ಲಿದೆ. ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿದೆ ಮತ್ತು ಅಲ್ಲಿಂದ ರಸ್ತೆ ಮತ್ತು ರೈಲು ಸಂಪರ್ಕವಿದೆ.
ಗೋಸಲಗುಬ್ಬಿ ಚನ್ನಬಸವೇಶ್ವರ ದೇವಸ್ಥಾನವು 1000 ವರ್ಷಗಳ ಹಿಂದೆ ಅಭಿವೃದ್ಧಿ ಹೊಂದಿದ್ದು ಪುಣ್ಯಕ್ಷೇತ್ರ ಮತ್ತು ಯಾತ್ರಾ ಸ್ಥಳವಾಗಿದೆ.ಗೋಸಲ ಚನ್ನಬಸವೇಶ್ವರ ಸ್ವಾಮಿಗಳು ಈ ಜಾಗಕ್ಕೆ ಬಂದಾಗ ಅವರಿಗೆ 70 ವರ್ಷವಾಗಿತ್ತು. ಗುಬ್ಬಿಯ ಮಲ್ಲಣ್ಣನ ಕಾಲ ಇತ್ತೀಚಿನ ಸಂಶೋಧನೆಯ ಪ್ರಕಾರ ಕ್ರಿ.ಶ. 1440ರಲ್ಲಿ ಮಲ್ಲಣ್ಣರು ಗುಬ್ಬಿಯಲ್ಲಿ ವಾಸವಾಗಿದ್ದರು.
“ನಿರಂಜನ ವಂಶರತ್ನಾಕರ” ಗ್ರಂಥದಲ್ಲಿ ಮಾತ್ರ ಗುಬ್ಬಿ ಕವಿಗಳಿಗೂ ಗೋಸಲ ಚನ್ನಬಸವೇಶ್ವರ ಸ್ವಾಮಿಗಳಿಗೂ ಇರುವುದರ ಬಗ್ಗೆ ದಾಖಲೆ ಇದೆ. ಬೇರೆ ಆಕರಗಳು ಆ ಬಗ್ಗೆ ಏನೂ ಹೇಳುವುದಿಲ್ಲ. ಕ್ರಿ.ಶ. 1445ರ ಸುಮಾರಿನಲ್ಲಿ ಗುಬ್ಬಿ ಪ್ರದೇಶಕ್ಕೆ ಗೋಸಲ ಚನ್ನಬಸವೇಶ್ವರರು ದಯಮಾಡಿಸಿದ್ದರು ಎಂದು ಊಹಿಸಬಹುದು.
ಚನ್ನಬಸವೇಶ್ವರರು ಮಠಗಳಿಗೆ ಹೋಗಿ ಬಂದಿದ್ದರು ಅವು ಯಾವ ಮಠಗಳೆಂದರೆ ಸಿದ್ಧಗಂಗಾ ಕ್ಷೇತ್ರ ಮತ್ತು ಎಡೆಯೂರಿಗೆ.
ಶ್ರೀ ಚನ್ನಬಸವೇಶ್ವರ ಸ್ವಾಮಿಗಳ ಕಾಲವು ಸರಿಯಾಗಿ ಎಲ್ಲೂ ಬರೆದಿಲ್ಲ. ಆದರೆ ಅವರ ಪವಾಡಗಳು ಇಂದಿಗೂ ಪ್ರಸಿದ್ಧಿ ಹೊಂದಿದೆ. ಮತ್ತು ತುಂಬ ಸಂಖ್ಯೆಯ ವೀರಶೈವ ಸಮಾಜದ ಭಕ್ತರಿದ್ದಾರೆ.
ಚನ್ನಬಸವೇಶ್ವರರು ರಾಗಿ ಶಾಹಿ ಮತ್ತು ಕೊಪ್ಪರ ಪೇಪರ್ ನಲ್ಲಿ ಬರೆದದ್ದನ್ನು ಗುಬ್ಬಿಹೊಸಹಳ್ಳಿ ಕುಟುಂಬದವರು ಸಂಗ್ರಹಿಸಿದ್ದಾರೆ. ಇದು ಸುಮಾರು 250 ವರ್ಷಗಳ ಹಿಂದಿನದು.
ಗೋಸಲಗುಬ್ಬಿ ಶ್ರೀ ಚನ್ನಬಸವೇಶ್ವರರು ತಮ್ಮ ಲಿಂಗದೇಹವನ್ನು ಬಿಟ್ಟದ್ದು ಹೊನ್ನಿಡಿಕೆ ಗ್ರಾಮದಲ್ಲಿ, ತದನಂತರ ಅವರ ಲಿಂಗದೇಹವನ್ನು ಗುಬ್ಬಿಗೆ ತಂದು ಸಮಾಧಿ ಮಾಡಲಾಯಿತು. ಇದಕ್ಕೆ ಪ್ರಮುಖ ಕಾರಣ ಗುಬ್ಬಿ ಹೊಸಹಳ್ಳಿ ಅರಸು ಮನೆತನದವರಿಗೆ ಅವರ ಮೇಲೆ ಇದ್ದ ಅಪಾರವಾದ ಭಕ್ತಿ, ಗದ್ದುಗೆಯಾದ ನಂತರ ಭವ್ಯವಾದ ದೇವಾಲಯ, ಪ್ರಾಂಗಣ, ಮಹಾದ್ವಾರದ ಮಜ್ಜನಬಾವಿ, ಹತ್ತಿರದಲ್ಲಿ ಚರಮೂರ್ತಿಗಳು ಇಳಿದುಕೊಳ್ಳಲು ಮಠ(ಮಹಾದ್ವಾರ), ಪಾಕಶಾಲೆ, ದಾಸೋಹ ಗೃಹ, ಸ್ವಾಮಿಗೆ ಎಡೆಮನೆಯನ್ನು ಕಟ್ಟಿಸಿ ತಮ್ಮ ಭಕ್ತಿಯನ್ನು ಪ್ರದರ್ಶಿಸಿದರು.
ದೇವಾಲಯದ ಮುಖಮಂಟಪದ ಭಿತ್ತಿಯಲ್ಲಿ ಶಿವನ ಪಂಚವಿಂಶತಿ ಲೀಲೆಯ ಸುಂದರವಾದ ಚಿತ್ರಗಳು 1940ರ ಸುಮಾರಿನಲ್ಲೂ ಇದ್ದವು.
ಗುಬ್ಬಿ ತೊರೆಮಠದ ವಿರಕ್ತ ಮೂರ್ತಿಗಳಾದ ಶ್ರೀ ಅಡವಿಸ್ವಾಮಿಗಳು ಶ್ರೀಗುರುವಿನಾಲಯಕ್ಕನುಕೂಲವಾಗುವಂತೆ ಪಾಪನಾಶೀನಿಯೆಂಬ ತೀರ್ಥ ಅಥವಾ ಕಲ್ಯಾಣಿಯನ್ನು ನಿರ್ಮಾಣ ಮಾಡಿ ಶ್ರೀ ಚಂದ್ರಮೌಳೀಶ್ವರ ಲಿಂಗಪ್ರತಿಷ್ಠೆಯನ್ನು ಸದ್ಭಕ್ತರ ಸಹಾಯದಿಂದ ಪೂರೈಸಿ ಸನ್ 1886ನೇ ಡಿಸೆಂಬರ್ ತಾ.9ನೇ ಬುಧವಾರ ಶಾಸನವನ್ನು ಹಾಕಿಸಿದ್ದಾರೆ.